ಮೈಸೂರು-ಕನ್ನಡಕ್ಕಾಗಿಯೇ ಬದುಕುತ್ತಿರುವವರು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಬೇಕಾಗಿರುವುದು ದೌರ್ಭಾಗ್ಯದ ಸಂಗತಿ-ಲೋಕೇಶ್ ಮೊಸಳೆ

ಮೈಸೂರು-ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ನಿರಂತರವಾಗಿ ಸೇವೆ ಸಲ್ಲಿಸಿ ಕನ್ನಡಕ್ಕಾಗಿಯೇ ಬದುಕುತ್ತಿರುವವರು ಇಂದು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವುದು ದೌರ್ಭಾಗ್ಯದ ಸಂಗತಿ ಎಂದು ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಬೇಸರ ವ್ಯಕ್ತಪಡಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಆವರಣದಲ್ಲಿಂದು ಜೆಎಸ್‌ಎಸ್ ಕಲಾಮಂಟಪದಲ್ಲಿ ಜರುಗಿದ ರಂಗೋತ್ಸವ 2024 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡಾಂಬೆಯ ಸೇವೆಗೈದ ಮಹನೀಯರನ್ನು ಸರ್ಕಾರವೇ ಗುರುತಿಸಿ,ಪುರಸ್ಕಾರವನ್ನು ನೀಡಿ,ಪ್ರೋತ್ಸಾಹಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ರoಗಭೂಮಿಯಲ್ಲಿ ದುಡಿಯುವವರು ಮನುಷ್ಯತ್ವವನ್ನು ಬೆಳೆಸಿಕೊಂಡಿರುತ್ತಾರೆ. ನಾಟಕ ನಮಗೆ ಭಾಷೆಯಲ್ಲಿನ ಉಚ್ಛಾರಣೆ ಹಾಗೂ ಸಂಸ್ಕಾರವನ್ನು ಬೆಳೆಸುತ್ತದೆ. ಜೊತೆ ಜೊತೆಗೆ ಸಾಹಸಿ ಮನೋಭಾವ, ನಾಯಕತ್ವ ಗುಣ ಬೆಳೆಯಲು ಇದು ಸಹಕಾರಿಯಾಗುತ್ತದೆಂದರು. ಜೆಎಸ್‌ಎಸ್ ನವಜ್ಯೋತಿ ಸಭಾಂಗಣ ರoಗಭೂಮಿ ಹಾಗೂ ಸಿನಿಮಾಗೆ ಇತಿಹಾಸ ನಿರ್ಮಿಸಿದ ಸ್ಥಳವಾಗಿದೆ. 1940ರಲ್ಲಿ ನಿರ್ಮಾಣಗೊಂಡಿದ್ದ ಸತಿ ಸುಲೋಚನ, ಕೃಷ್ಣಲೀಲಾ ಸಿನಿಮಾಗಳು ನವಜ್ಯೋತಿ ಸ್ಟುಡಿಯೋದಲ್ಲೆ ನಿರ್ಮಾಣಗೊಂಡವು ಎoಬುದಕ್ಕೆ ಈ ಸಭಾಂಗಣವೇ ಸಾಕ್ಷಿ ಎಂದು ತಿಳಿಸಿದರು. ವ್ಯಕ್ತಿಯಲ್ಲಿನ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತಂದುಕೊಟ್ಟ ಕೀರ್ತಿ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಸಲ್ಲುತ್ತದೆಂದು ಲೋಕೇಶ್ ಮೊಸಳೆ ಪ್ರಶಂಸಿಸಿದರು.

ಹಿರಿಯ ರಂಗಕರ್ಮಿ ಪ್ರಸಾದ್ ಕುಂದೂರ್ ಮಾತನಾಡಿ,ಇಂದಿನ ಮಕ್ಕಳಲ್ಲಿ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸುವಂತದ್ದು ನಮ್ಮೆ ಲ್ಲರ ಜವಾಬ್ದಾರಿ. ಏಕೆಂದರೆ, ಪಠ್ಯ ಪುಸ್ತಕದ ಜೊತೆ ಜೊತೆಗೆ ಪಠ್ಯದ ಭಾಗವಾಗಿ ರಂಗಭೂಮಿಯ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಿದಾಗ ರಂಗಭೂಮಿಯ ಬಗ್ಗೆ ಹೆಚ್ಚು ಒಲವು ಮಕ್ಕಳಲ್ಲಿ ಮೂಡಿ, ರಂಗಪ್ರವೇಶ ಪಡೆಯಲು ಅನುಕೂಲವಾಗುತ್ತದೆಂದರು.

ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯದ ಸಂಕೇತ ರoಗಭೂಮಿ. ಜಾತಿ, ಭೇದ, ವರ್ಗ, ವರ್ಣ ಎಲ್ಲವನ್ನೂ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವುದೇ ಈ ರಂಗಕಲೆಗಳು. ರಂಗಕಲೆಗಳನ್ನು ಜೀವಂತವಾಗಿಸಲು ಇoದಿನ ಯುವ ಜನಾಂಗ ಮುಂದಾಗಬೇಕೆoದು ತಿಳಿಸಿದರು. ಶಿಕ್ಷಣದ ಜೊತೆಗೆ ಶಕ್ತಿಶಾಲಿ ಮಾಧ್ಯಮವಾಗಿ ರಂಗಭೂಮಿಯನ್ನೂ ಕಾಣಬೇಕಿದೆ. ವಿಜ್ಞಾನದ ವಿಷಯಗಳನ್ನು ರಂಗ ಕಲೆಗಳ ಮೂಲಕ ಅರ್ಥೈಸುತ್ತಾ ಹೋದಾಗ ಬಹಳ ಬೇಗ ವಿದ್ಯಾರ್ಥಿಗಳ ಮನಸ್ಸಿಗೆ ನಾಟುತ್ತದೆಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೃತ್ತಿರಂಗ ಕಲಾವಿದೆ ಶ್ರೀಮತಿ ಸರಸ್ವತಿ ಜುಲೇಖಾ ಬೇಗಂ ಮಾತನಾಡಿ, ರಂಗಭೂಮಿ ನಮಗೆ ಜಗತ್ತು ಏನೆಂಬುದನ್ನು ಕಲಿಸುತ್ತದೆ. ಮನೆಗೊಬ್ಬ ಕಲಾವಿದನಿದ್ದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ರಂಗಭೂಮಿಯನ್ನು ನೆಚ್ಚಿ ಬಂದರೆ ಅವರನ್ನು ಎಂದಿಗೂ ಕೈಬಿಡದೇ ಮುನ್ನಡೆಸುವ ಸಾಂಸ್ಕೃತಿಕ ಕಲೆ ರಂಗಭೂಮಿ ಎಂದoರು.

ವೇದಿಕೆಯಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಕಲಾವಿದರಾದ ಚಂದ್ರಶೇಖರ ಆಚಾರ್, ಕೃಷ್ಣಚೈತನ್ಯ ಹಾಗೂ ರಂಗ ಕಲಾವಿದರು ಉಪಸ್ಥಿತರಿದ್ದರು.

ನಂತರ ಜಂಗಮದಡೆಗೆ ನಾಟಕವನ್ನು ಗುಂಡ್ಲುಪೇಟೆ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.

Leave a Reply

Your email address will not be published. Required fields are marked *

× How can I help you?