ನಾಗಮಂಗಲ, ಜೂನ್ 12: ನಾಗಮಂಗಲ ತಾಲ್ಲೂಕಿನ ಕಬ್ಬಿನಕೆರೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಶ್ರೀ ಕೆಂಪಲಿಂಗೇಗೌಡ (ವಯಸ್ಸು 96) ಅವರು ಗುರುವಾರ ಸಂಜೆ 6.30ಕ್ಕೆ ಮೈಸೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅನೇಕ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರು, ತಾಲೂಕು ಹಾಗೂ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಗೌರವಾರ್ಹ ವ್ಯಕ್ತಿಯಾಗಿದ್ದರು. ವಿದ್ಯಾರ್ಥಿಗಳ character development ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನೀಡಿದ ಸೇವೆಗೆ ಅವರು ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದಿದ್ದರು.

ಅವರ ನಿಧನದ ಸುದ್ದಿ ಶಿಕ್ಷಣ ಕ್ಷೇತ್ರದಲ್ಲಿ ದುಃಖದ ಛಾಯೆ ಎಬ್ಬಿಸಿದೆ. ಕುಟುಂಬಸ್ಥರಿಗೆ, ಶಿಷ್ಯರು ಹಾಗೂ ಸ್ನೇಹಿತರಿಗೆ ಆಳ ಸಂತಾಪ ಸೂಚಿಸಲಾಗಿದೆ. ಅಂತ್ಯಕ್ರಿಯೆ ಮೈಸೂರಿನಲ್ಲಿಯೇ ಶುಕ್ರವಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವರದಿ: ಬಿ.ಹೆಚ್. ರವಿ,ನಾಗಮಂಗಲ