ಬೇಲೂರು, ಮೇ 30 – ಬೌದ್ಧ ಧರ್ಮದ ಆದರ್ಶಗಳನ್ನು ಅನುಸರಿಸಿ, ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದಾಹರಣೆ ನೀಡಿದವರು ಗಾಂಧಾರ ಬುದ್ಧ ವಿಹಾರದ ಖಜಾಂಚಿ ಹಾಗೂ ಗಾಂಧಾರ ಎಂಟರ್ಪ್ರೈಸಸ್ನ ಮಾಲೀಕ ಪ್ರವೀಣ್ ಬೌದ್ದ್.
ತಮ್ಮ ದಿನದ ವಿಶೇಷತೆಗೆ ವಿನೂತನ ಅರ್ಥ ನೀಡಲು, ಪ್ರವೀಣ್ ಅವರು ನೂರು ಬಡವರಿಗೆ ಒಂದು ಹೊತ್ತಿನ ಊಟದ ಅನ್ನದಾನ ಮಾಡಿದರು. ಇದು ದಮ್ಮ ದಾನದ ರೂಪದಲ್ಲಿ ಮಾಡಲ್ಪಟ್ಟ, ಬೌದ್ಧ ಧರ್ಮದಲ್ಲಿ ಧರ್ಮ ದಾನದ ಮಹತ್ವವನ್ನು ಪ್ರತಿಪಾದಿಸುವ ಅಂಶವಾಗಿದೆ.
ಬುದ್ಧ ಹಾಗೂ ಅಂಬೇಡ್ಕರ್ ಅವರ ತತ್ತ್ವಗಳಿಗೆ ನಿಷ್ಠರಾಗಿರುವ ಪ್ರವೀಣ್ ಅವರ ಈ ಸಮಾಜಮುಖಿ ಹೆಜ್ಜೆಗೆ ಅಭಿಮಾನಿ ಬಳಗವು ಹರ್ಷ ವ್ಯಕ್ತಪಡಿಸಿ, “ಪ್ರವೀಣ್ ಬೌದ್ದ್ ರವರಿಗೆ ಭಗವಂತ ಇನ್ನಷ್ಟು ದಾನಧರ್ಮ ಮಾಡಲು ಶಕ್ತಿ ನೀಡಲಿ,” ಎಂದು ಶುಭ ಹಾರೈಸಿದೆ.
ಈ ಉದಾಹರಣೆ ಇತರರಿಗೆ ಪ್ರೇರಣೆಯಾದಂತಾಗಿದ್ದು, ಹುಟ್ಟುಹಬ್ಬದ ಖುಷಿಯನ್ನು ಸಮಾಜಹಿತದ ಕಾರ್ಯಗಳ ಮೂಲಕ ಹಂಚಿಕೊಳ್ಳುವ ಪ್ರಜ್ಞೆ ಪ್ರಕಾಶಮಾನವಾಗಿದೆ.
– ನೂರ್ ಅಹಮದ್
ಬೇಲೂರು