ಚಿಕ್ಕಮಗಳೂರು, ಮೇ.31:- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾಗಿ ಸಂಘಟಕಿ, ಉಪನ್ಯಾಸಕಿ, ಪ್ರಿಯಾಂಕ ಭರತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಮಾಧ್ಯಮ ಮಿತ್ರರೊಂದಿಗೆ ,ಮಾಹಿತಿ ಹಂಚಿಕೊಂಡ ಅವರು, ಜಿಲ್ಲೆಯಲ್ಲಿ ಸಾಹಿತಿಗಳನ್ನು ಚಿಂತಕರನ್ನು ಒಟ್ಟುಗೂಡಿಸಿಕೊಂಡು ಕಾವ್ಯ ಕಮ್ಮಟ, ಕವಿಗೋಷ್ಠಿಗಳನ್ನು ಆಯೋಜಿಸುವ ಮೂಲಕ ಕವನಗಳ ರಚಿಸಬೇಕು. ಪ್ರತಿ ಹೋಬಳಿ ಹಂತದಲ್ಲಿ ಕಸಾಪ ಶಾಖೆಗಳನ್ನು ತೆರೆದು, ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಿ ಎಂದರು.

ನೂತನ ಅಧ್ಯಕ್ಷೆ ಪ್ರಿಯಾಂಕ ಭರತ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತನ್ನು ಶಾಲಾ ಕಾಲೇಜುಗಳಿಗೆ ವಿಶೇಷವಾಗಿ ಯುವಕರಿಗೆ ಪರಿಚಯಿಸುವುದು ಮತ್ತು ಮನೆಯಂಗಳದಲ್ಲಿ ಸಾಹಿತ್ಯಗೋಷ್ಠಿ ಏರ್ಪಡಿಸಿ, ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
– ಸುರೇಶ್ ಎನ್.