ಕೆ.ಆರ್.ಪೇಟೆ – ಕೋರಟೆಕೆರೆ ಗ್ರಾಮದಲ್ಲಿ ವಿಜೃಂಭಣೆಯಿಂದ ರಾಮಲಿಂಗೇಶ್ವರ – ಚೌಡೇಶ್ವರಿ ಜಾತ್ರಾ ಮಹೋತ್ಸವ

ಕೆ.ಆರ್.ಪೇಟೆ,ಜೂ.14: ನಮ್ಮ ದೇಶದ ಜನಪದ ಸಂಸ್ಕೃತಿಯು ಶ್ರೀಮಂತಿಕೆಯು ಗ್ರಾಮೀಣ ಪ್ರದೇಶದಲ್ಲಿದೆ ಎಂಬುದಕ್ಕೆ ಹಬ್ಬಗಳು, ಜಾತ್ರೆ-ಉತ್ಸವಗಳು, ಸುಗ್ಗಿ ಉತ್ಸವಗಳು ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವುದೇ ಸಾಕ್ಷಿಯಾಗಿದೆ ಎಂದು ರಾಜ್ಯ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಹೇಳಿದರು.

ಅವರು ತಾಲ್ಲೂಕಿನ ಕೊರಟೀಕೆರೆ ಗ್ರಾಮದ ಶ್ರೀ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ಅಮ್ಮನವರ ದೊಡ್ಡ ಹಬ್ಬ ಹಾಗೂ ದೇವರುಗಳ ಜಾತ್ರಾ ಮಹೋತ್ಸವಕ್ಕೆ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ಮಾನವೀಯ ಮೌಲ್ಯ, ಸಂಸ್ಕಾರ, ಧಾನ-ಧರ್ಮ, ಪ್ರೀತಿ-ವಿಶ್ವಾಸ, ಸೌಹಾರ್ಧ ಗುಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ದೇಶವಾಗಿದೆ. ಇದರಿಂದಾಗಿ ಭಾರತವು ನಮ್ಮ ದೇಶಕ್ಕೆ ದೈವಬಲ ಇದೆ. ಸಂಸ್ಕೃತಿ ಸಂಸ್ಕಾರಕ್ಕೆ ನಮ್ಮ ದೇಶವು ಮುಂದಿದೆ. ಹಾಗಾಗಿ ಊರಿನ ಹಬ್ಬ ಹರಿದಿನಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಊರಿನ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಕೊರಟೀಕೆರೆ ಗ್ರಾಮಸ್ಥರು ಸುಮಾರು 1ವಾರಗಳ ಕಾಲ ಊರ ಹಬ್ಬವನ್ನು ಗ್ರಾಮದಲ್ಲಿ ವಾಸಿಸುವ ಎಲ್ಲಾ ಸಮುದಾಯದವರು ಸೇರಿ ಯಶಸ್ವಿಯಾಗಿ ಮಿನಿ ದಸರಾ ಮಾದರಿಯಲ್ಲಿ ಆಚರಣೆ ಮಾಡಿರುವುದು ಶ್ಲಾಘನೀಯವಾದುದು. ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಜಂಜಾಟದಿಂದ ದೂರವಿಟ್ಟು ಮನಸ್ಸಿಗೆ ನೆಮ್ಮದಿ ಸಂತೋಷ ತರುತ್ತವೆ. ನಿತ್ಯ ಅನ್ನದಾಸೋಹ ಮಾಡಿ ಲಕ್ಷಾಂತರ ಮಂದಿಗೆ ಅನ್ನದಾನ ಮಾಡಿದ ಕೀರ್ತಿಗೆ ಕೊರಟೀಕೆರೆ ಗ್ರಾಮಸ್ಥರು ಭಾಜನರಾಗಿದ್ದೀರಿ, ವಿವಿಧ ಮಠಾಧೀಶರನ್ನು ಆಹ್ವಾನಿಸಿ ಅವರ ಮೂಲಕ ಧಾರ್ಮಿಕ ಪ್ರಜ್ಞೆ ಮೂಡಿಸಿರುವುದು ಜನರಲ್ಲಿ ಸುಸಂಸ್ಕೃತ ಗುಣಗಳು ಹೆಚ್ಚಾಗಲು ಕಾರಣವಾಗಿದೆ.

ಇದೇ ರೀತಿ ಪ್ರತಿಯೊಂದು ಗ್ರಾಮಗಳಲ್ಲಿ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಹಬ್ಬ ಹರಿದಿನಗಳನ್ನು ನಿಲ್ಲಿಸಬಾರದು ಎಲ್ಲರೂ ಸೇರಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದಾಗ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಸಂರಕ್ಷಣೆ ಮಾಡಿಕೊಂಡು ಹೋಗಲು ಪ್ರೇರಣೆ ನೀಡಿದಂತಾಗುತ್ತದೆ.

ಭೂಮಿಗೆ ಬಂಗಾರದ ಬೆಲೆಯುವಕರು. ಕೃಷಿಯಿಂದ ವಿಮುಖರಾಗಬಾರದು. ಮುಂದಿನ 10-15ವರ್ಷಗಳಲ್ಲಿ ರೈತರ ಭೂಮಿಗೆ ಬಂಗಾರದ ಬೆಲೆ ಬರುತ್ತದೆ. ಆಗ ಹಳ್ಳಿ ರೈತರನ್ನು ಹುಡುಕಿ ಹುಡುಕಿ ಹೆಣ್ಣು ಕೊಡುವ ಕಾಲ ಬರುತ್ತದೆ. ಆದ್ದರಿಂದ ಯುವಕರು ಕೃಷಿಯನ್ನು ಮರೆಯಬಾರದು. ರೈತರನ್ನು ಜಮೀನನ್ನು ಯಾವುದೇ ಕಾರಣಕ್ಕೂ ಮಾರದೇ ಉಳಿಸಿಕೊಂಡು ಬೇಸಾಯ ಮಾಡಿಕೊಂಡು ಹೋಗಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ರೈತರಿಗೆ ಕರೆ ನೀಡಿದರು.

ಗ್ಯಾರಂಟಿಯಿಂದ ನೆಮ್ಮದಿ: ರಾಜ್ಯದ ಜನ ನೆಮ್ಮದಿಯಿಂದ ಜೀವಿಸಿ ಅಭಿವೃದ್ಧಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ರೂ.2000 ರೂ,10 ಕೆಜಿ ಅಕ್ಕಿ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ನೀಡಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ, ಜಿಲ್ಲೆಯ ಜನರ ಸಹಕಾರದಿಂದ ನಮ್ಮ ಸರ್ಕಾರ ಕೃಷಿ ಸಚಿವರಾಗಿ ಒಂದೇ ಒಂದು ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಸೇರದಂತೆ ಕೃಷಿ ಪರಿಕರಗಳು ಕೊರತೆಯಾಗದಂತೆ ಸಕಾಲಕ್ಕೆ ನಿಭಾಯಿಸುತ್ತಿದ್ದೇನೆ ಎಂದರು.

ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ಶ್ರೀ.ರುದ್ರಮುನಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್,ಬಿ ಪ್ರಕಾಶ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ತಹಸೀಲ್ದಾರ್ ಡಾ.ಎಸ್. ಯು ಅಶೋಕ್, ತಾ.ಪಂ.ಇಓ ಸುಷ್ಮಾ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್.ದಿವಾಕರ್, ಅಘಲಯ ಎ.ವೈ.ವಿಜಯ್‌ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಹೆತ್ತಗೋನಹಳ್ಳಿ ನಾರಾಯಣಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕೊರಟೀಕೆರೆ ದಿನೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಭಾರತೀಪುರ ಕ್ರಾಸ್ ಗ್ರಾ.ಪಂ.ಅಧ್ಯಕ್ಷ ಬಿ.ಎನ್.ಕುಮಾರ್, ಉಪಾಧ್ಯಕ್ಷೆ ಕೃಷ್ಣವೇಣಿಜನಾರ್ಧನ್, ತಾ. ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಉದ್ಯಮಿ ಬಿ.ರಾಜಶೇಖರ್, ಸಚಿವರ ಆಪ್ತ ಸಹಾಯಕ ಚೇತನಾ ಮಹೇಶ್, ಮುಖಂಡರಾದ ಕೆ.ಆರ್.ರಾಜೇಶ್, ರವಿ, ಮಂಜುನಾಥ್, ಕೆ.ಎನ್.ಕೃಷ್ಣೇಗೌಡ, ದೇವನಾಥ್, ಕುದೂರು ವೆಂಕಟೇಶ್, ಕೃಷ್ಣಮೂರ್ತಿ, ಹುಳಿಯಾರು ನಾಗರತ್ನ, ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಗೋವಿಂದರಾಜ್, ಖಜಾಂಚಿ ಅಶೋಕ್, ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ರವಿಚಂದ್ರ, ಧಾರ್ಮಿಕ ಸಂಘಟಕ ಡಾ.ಶ್ರೀಧರ್ ಶರ್ಮಾ ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು.

ಸುಮಾರು 1ವಾರಗಳ ಕಾಲ ನಡೆದ ಊರ ಹಬ್ಬದಲ್ಲಿ ಲಕ್ಷಾಂತರ ಮಂದಿ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *