ರಾಮನಾಥಪುರ, ಮೇ 30: ರಾಮನಾಥಪುರ ಹೋಬಳಿ ಬಸವಪಟ್ಟಣದ ಎಸ್.ಸಿ.ವಿ.ಡಿ.ಎಸ್. ಪೌಢಶಾಲೆಯ ವಯೋನಿವೃತ್ತಿ ಹೊಂದಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಜೂನ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಸವಪಟ್ಟಣದ ಶ್ರೀ ತೋಂಟದಾರ್ಯ ಸಭಾ ಭವನದಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಶಾಲೆಯ ಹಿರಿಯ ವಿದ್ಯಾರ್ಥಿ ವೃಂದದವರು ಹಮ್ಮಿಕೊಂಡಿದ್ದಾರೆ ಎಂದು ಹಿರಿಯ ವಿದ್ಯಾರ್ಥಿಗಳ ವೃಂದದವರು ತಿಳಿಸಿದರು.
ಮಾಧ್ಯಮ ಮಿತ್ರರಿಗೆ ಮಾಹಿತಿ ನೀಡಿದ ಅವರು, ಈ ಸ್ಮರಣೀಯ ಕಾರ್ಯಕ್ರಮದಲ್ಲಿ ಅರಕಲಗೂಡು ತಾಲೂಕು ಬೆಟ್ಟದಪುರ ಮತ್ತು ಕನ್ನಡ ಮಠದ ಶ್ರೀ ಚನ್ಮಬಸವದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ವಯೋನಿವೃತ್ತ ಶಿಕ್ಷಕರಾದ ಎಚ್.ಬಿ. ಲಿಂಗಮೂರ್ತಿ, ಕೆ.ವಿ. ಚಂದ್ರಶೇಖರ, ಎಸ್.ಎಚ್. ಶಿವಮೂರ್ತಿ, ಬಿ.ಎಂ. ಜಯಣ್ಣ, ಜಿ. ಮಹೇಶ್, ಶ್ರೀಮತಿ ನಳಿನಿ ಮತ್ತು ಕೆ.ಟಿ. ಅಶೋಕ್ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನ ಸಲ್ಲಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಂ.ಎಂ. ಸುರೇಶ್ ವಹಿಸಲಿದ್ದು, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್, ವೀ.ವಿ.ಲಿಂ. ಮಹಾವೇದಿಕೆಯ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಂಯೋಜಕರಾದ ಸದಾಶಿವಪ್ಪ, ನಾಗರಾಜು, ಸಿಆರ್ಪಿ ವಿಶ್ವೇಶ್ವರಯ್ಯ ಹಾಗೂ ಮುಖ್ಯ ಶಿಕ್ಷಕರು ತೇಜೋಧರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
- ಶಶಿಕುಮಾರ್, ಕೆಲ್ಲೂರು.