ತುಮಕೂರು-ಶ್ರೀ-ಕ್ಷೇತ್ರ-ಧರ್ಮಸ್ಥಳಕ್ಕೆ-ಹಾಗೂ-ಪೂಜ್ಯ-ವೀರೇಂದ್ರ- ಹೆಗ್ಗಡೆಯವರಿಗೆ-ಕೆಲವು-ದುಷ್ಟ-ಗುಂಪು-ಕೆಟ್ಟ-ಹೆಸರು-ತರಲು- ಹೊರಟಿವೆ-ಜನಜಾಗೃತಿ-ವೇದಿಕೆಯ-ಸದಸ್ಯ-ಶಿವಕುಮಾರ್

ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೋರ ಹೋಬಳಿ ಕೆಸ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಮ್ಮರವರಿಗೆ ಕಟ್ಟಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಸದಸ್ಯ ಶಿವಕುಮಾರ್ ರವರು ಉದ್ಘಾಟನೆ ಮಾಡಿ, ಮನೆಯನ್ನು ಫಲಾನುಭವಿಯಾದ ಶಾಂತಮ್ಮರವರಿಗೆ ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳ ದೂರ ಚಿಂತನೆ ಇವತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಲು ಸಾಧ್ಯವಿದೆ. ಶ್ರೀ ಕ್ಷೇತ್ರಕ್ಕೆ ಮತ್ತು ಪೂಜ್ಯ ವೀರೇಂಡ ಹೆಗ್ಗಡೆಯವರಿಗೆ ಕೆಲವು ದುಷ್ಟ ಜನರಿಂದ ಕಳಂಕ ತರುವ ಪ್ರಯತ್ನ ಮಾಡುತ್ತಿದ್ದು, ಇಂತಹ ಅಪಪ್ರಚಾರಗಳಿಗೆ ಯಾರು ಕಿವಿಕೊಡದೆ ಇದನ್ನು ವಿರೋಧಿಸುವ ಕೆಲಸ ನಮ್ಮಿಂದಾಗಬೇಕು. ಮುಂದಿನ ದಿನಗಳಲ್ಲಿ ಅನಿವಾರ್ಯವಾದರೆ ಈ ಬಗ್ಗೆ ಹೋರಾಟ ನಡೆಸಲು ನಾವೆಲ್ಲರೂ ಸಿದ್ದರಾಗಬೇಕು ಎಂದು ತಿಳಿಸಿದ ಅವರು, ಕ್ಷೇತ್ರದ ಪರಂಪರೆಯನ್ನು ಉಳಿಸಿ ಈ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಪೂಜ್ಯರ ವೀರೇಂದ್ರ ಹೆಗ್ಗಡೆ ಯವರು ನೀಡಿದ್ದಾರೆ ಇಂತಹ ಸಮಾಜ ಸೇವೆಗೆ ನಾವೆಲ್ಲ ಕೈ ಜೋಡಿಸೋಣ ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ತಾಲ್ಲೋಕು ಯೋಜನಾಧಿಕಾರಿಗಳಾದ ಸಂದೇಶ್ ಪಿ.ಬಿ ಹಾಗೂ ಪಂಚಾಯತ್ ಅಧ್ಯಕ್ಷರಾದ ಸುನೀತಾ,ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳಾದ ಧನಲಕ್ಷ್ಮಿ, ವಲಯದ ಮೇಲ್ವಿಚಾರಕರಾದ ಸೋಮಶೆಟಿ,್ಟ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?