ತುಮಕೂರು- ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ವಕೀಲರಿಂದ ಶ್ರೀರಾಮನವಮಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಶ್ರೀರಾಮನಿಗೆ ಪೂಜೆ ಸಲ್ಲಿಸಿದರು.ನಂತರ ಕಕ್ಷಿದಾರರು,ಸಾರ್ವಜನಿಕರು,ವಕೀಲರಿಗೆ ಪಾನಕ,ಕೋಸಂಬರಿ,ಮಜ್ಜಿಗೆ,ಫಲಹಾರವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಹೀರೇಹಳ್ಳಿ ಮಹೇಶ್,ಶ್ರೀಮತಿಭವ್ಯಶಾನುಭೋಗ್, ಬಿ.ಜಿ.ಸತೀಶ್, ಸಿಂಧು, ಶಿವಶಂಕರಯ್ಯ, ಧನಂಜಯ, ಜಗದೀಶ್.ಡಿ.ಎ, ಜೆ.ಕೆ.ಅನಿಲ್, ಬಿ.ವಿ.ವಸಂತಕುಮಾರ್, ಮೂರ್ತಿ, ನವೀನ್, ಹರೀಶ್, ದೇವರಾಜು ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ