ಅರಕಲಗೂಡು ತಾಲೂಕು, ರಾಮನಾಥಪುರ (ಹಾಸನ): ತಾಲೂಕಿನ ರಾಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟವಾಳು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಗಂಭೀರವಾಗಿದ್ದು, ಬೈಕಿನಲ್ಲಿ ತೆರಳುತ್ತಿದ್ದ ರಾಮನಾಥಪುರದ ಅರ್.ಕೆ. ಚೇತನ್ (33) ಎಂಬುವವರ ಕಾಲಿಗೆ ಹುಚ್ಚು ನಾಯಿ ಕಚ್ಚಿ, ರಕ್ತಸ್ರಾವದಿಂದ ಅವರನ್ನು ತಕ್ಷಣ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೊಂದು ಪೈಕಿ, ಒಂದೇ ದಿನದಲ್ಲಿ ರಾಮನಾಥಪುರದಲ್ಲಿ 5 ಜನರಿಗೆ ನಾಯಿ ಕಚ್ಚಿದ ಘಟನೆಗಳು ವರದಿಯಾಗಿದ್ದು, ಗ್ರಾಮಸ್ಥರಲ್ಲಿ ಭಯದ ಮಡು ಹರಡಿಸಿದೆ. ಚೇತನ್ ಅವರಿಗೆ ಕೊಣನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಹಾಸನಕ್ಕೆ ಸಾಗಿಸಲಾಗಿತು.

ನಾಯಿಗಳ ಹಾವಳಿಯಿಂದ ಜನರು ಆತಂಕದಲ್ಲಿ
ರಾಮನಾಥಪುರದ ಮುಖ್ಯ ರಸ್ತೆಗಳಿಂದ ಪ್ರಾರಂಭಿಸಿ ದೇವಾಲಯಗಳವರೆಗೂ, ಹಿಂಡುಹಿಂಡಾಗಿ ಬೀದಿ ನಾಯಿಗಳು ತಿರುಗಾಡುತ್ತಿದ್ದು, ಈ ಪ್ರದೇಶದಲ್ಲಿ ಭಕ್ತರು ಪ್ರತಿದಿನ ಭೇಟಿ ನೀಡುವ ಶ್ರೀ ಸುಬ್ರಹ್ಮಣ್ಯಸ್ವಾಮಿ ಮತ್ತು ರಾಮೇಶ್ವರಸ್ವಾಮಿ ದೇವಾಲಯಗಳ ಪಾದಯಾತ್ರಿಕರೂ ಅಲ್ಲದೆ ಸ್ಥಳೀಯರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.
ರಾತ್ರಿ ವೇಳೆ ನಾಯಿಗಳ ಬೋಗಳುವಿಕೆ, ಗಲಾಟೆ ಮತ್ತು ಕಚ್ಚಾಟಗಳಿಂದ ನಿದ್ರೆ ಭಂಗವಾಗುತ್ತಿರುವುದರ ಜೊತೆಗೆ, ನಾಯಿ ದಾಳಿಯ ಅಪಾಯದಿಂದ ಸಾರ್ವಜನಿಕರು ಮನೆ ಹೊರಗೆ ತೆರಳಲು ಸಹ ಭಯಪಡುವ ಪರಿಸ್ಥಿತಿ ಉಂಟಾಗಿದೆ.

ಗ್ರಾಮಸ್ಥರಿಂದ ಗಂಭೀರ ಮನವಿ
ಇಂತಹ ಪರಿಸ್ಥಿತಿಗೆ ಕೊನೆ ಹಾಡುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು, ಬೀದಿ ನಾಯಿಗಳನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒಕ್ಕಟ್ಟಾಗಿ ಬೇಡಿಕೆ ಮುಂದಿಟ್ಟಿದ್ದಾರೆ.
- ಕೆಲ್ಲೂರು ಶಶಿಕುಮಾರ್