ಮತದ ತೂಕ, ಮೌನದ ಬೆಲೆ, ಮತ್ತು ನಂಬಿಕೆಯ ಕುಸಿತ – ಒಂದು ರಾಜಕೀಯ ಅವಲೋಕನ

ಭಯವೇ ಒಂದು ಸಮಾಜದ ಜೀವವಾಯುವನ್ನು ಹೀರಿಕೊಳ್ಳಬಲ್ಲದು. ಇತ್ತೀಚಿನ ದಕ್ಷಿಣ ಕನ್ನಡದಲ್ಲಿ, ಖಾಸಗಿ ಜೀವದ ಅಗತ್ಯ ಭದ್ರತೆ ಇಲ್ಲದ ಮಟ್ಟಿಗೆ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳು ಈ ಮಾತನ್ನು ಮತ್ತೆ ಸಾಬೀತು ಮಾಡಿವೆ.

ಈ ಸಂದರ್ಭದಲ್ಲಿ, ಭದ್ರತೆಯ ಭರವಸೆಯನ್ನು ನೀಡಿದ ಕಾಂಗ್ರೆಸ್ ಸರ್ಕಾರವೇ ತಾನೇ ಈ ಭಯವನ್ನು ಸಮರ್ಥಿಸುತ್ತಿದೆಯಾ? ಎಂಬ ಪ್ರಶ್ನೆ ಈಗ ನೇರವಾಗಿ ಹೊರಬರುತ್ತಿದೆ. ಅಧಿಕಾರದ ಸವಾರಿ ಮತದ ಬಲದಿಂದ – ಆದರೆ ಮೌನ ಪ್ರತಿನಿಧಿತ್ವ?

2018, 2023 ಚುನಾವಣೆಗಳಲ್ಲಿ ಮುಸ್ಲಿಂ ಸಮಾಜದ ಮತ, ವಿಶೇಷವಾಗಿ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ, ಕಾಂಗ್ರೆಸ್ ಪಕ್ಷವನ್ನು ನಿರ್ಣಾಯಕ ಗೆಲುವಿಗೆ ಕೊಂಡೊಯ್ದ ಶಕ್ತಿಯಾಗಿದೆ. ಅಲ್ಪಸಂಖ್ಯಾತರ ಕ್ಷಮಾಭಿಕ್ಷೆ, ಭದ್ರತಾ ಭರವಸೆ, ಹಿಂಸೆಗೆ ತಡೆಯುವ ಚಟುವಟಿಕೆಗಳು, ಸಮಾನತೆ – ಇವೆಲ್ಲವನ್ನು ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆಯಾಗಿ ನೀಡಿತ್ತು. ಆದರೆ ಇಂದು, ಅದೇ ಸಮಾಜದ ಮೇಲೆ ದಾಳಿ ನಡೆದಾಗ – ಅದೇ ಪಕ್ಷದ ಶಾಸಕರು ಮತ್ತು ಮಂತ್ರಿಗಳು ಮೌನವಾಗಿರುವುದು ನಗ್ನ ನೈತಿಕ ದ್ರೋಹ. ರಾಜಕೀಯ ಸಮಾಚಾರವಲ್ಲ – ಸಮುದಾಯದ ಆತ್ಮಘಾತ.

ದಕ್ಷಿಣ ಕನ್ನಡದ ಮುಸ್ಲಿಂ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿರುವುದು, ಕೇವಲ ರಾಜಕೀಯ ನಿರಾಕರಣೆ ಅಲ್ಲ. ಇದು ನಂಬಿಕೆಯ ಅಂತ್ಯಕ್ರಿಯೆ. ಇದು ಪಕ್ಷಕ್ಕೆ ಸುಳಿವಲ್ಲ, ಇಡೀ ರಾಜಕೀಯ ವ್ಯವಸ್ಥೆಗೆ ಎಚ್ಚರಿಕೆ.

“ಮತ ಕೇಳೋಕೆ ಮುಸ್ಲಿಂ ಸಮುದಾಯ ಬೇಕಾ?
ಆದರೆ ರಕ್ಷಣೆ ನೀಡೋಕೆ ಅಲ್ಲವಾ?” ಅಲ್ಪಸಂಖ್ಯಾತ ಶಾಸಕರು – ಯಾರ ಪರ?

ರಾಜ್ಯದಲ್ಲಿ 10ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ (ಮುಸ್ಲಿಂ) ಶಾಸಕರು ಇದ್ದಾರೆ. ಕೆಲವರು ಸಚಿವರಾಗಿದ್ದರೂ, ಅವರು ಇಂತಹ ನಿರಂತರ ದಾಳಿಗಳ ಬಗ್ಗೆ ಒಂದು ಸಾರ್ವಜನಿಕ ಧ್ವನಿ ಎತ್ತಿಲ್ಲ. ಅವರ ಮೌನ ಏನು ಸೂಚಿಸುತ್ತದೆ?

ಅವರು ಪಕ್ಷದ “ಶಿಸ್ತು” ಹೆಸರಿನಲ್ಲಿ ನಿಜವನ್ನು ಕಣ್ಣಿಟ್ಟು ನೋಡುತ್ತಿಲ್ಲವೋ? ಅಥವಾ ಅವರು ತಮ್ಮ ಸ್ಥಾನ ಉಳಿಸಿಕೊಳ್ಳುವುದನ್ನು, ಸಮಾಜದ ಭದ್ರತೆಗೆ ಮೀರಾಗಿ ನೋಡುತ್ತಿದ್ದಾರೆವೋ? ಸಮುದಾಯ ಈ ಪ್ರಶ್ನೆಗಳಿಗೆ ಉತ್ತರ ಕೇಳುತ್ತಿದೆ.
ಇಲ್ಲಿ ದ್ವಂದ್ವವಿಲ್ಲ – ಇದು ಸರಳವಾಗಿ ನಂಬಿಕೆ ವಿರುದ್ಧದ ರಾಜಕೀಯ.

ರಾಜೀನಾಮೆಗಳು – ಏಕೆ ಇದು ರಾಜಕೀಯ ತಂತ್ರವಲ್ಲ, ಪರಿವರ್ತನೆಯ ತಾಕತ್ತು?

ಈ ರಾಜೀನಾಮೆಗಳನ್ನು ಕೆಲವರು ಅತಿರೇಕ ಎಂದು ಟೀಕಿಸುತ್ತಾರೆ. ಆದರೆ ಸತ್ಯವೇನೆಂದರೆ –
ಇದೇ ರೀತಿಯ ಮೌನ, ನಿರ್ಲಕ್ಷ್ಯ, ಮತ್ತು ರಾಜಕೀಯ ಲಾಭಪರತೆ ಮುಂದುವರಿದರೆ – ಮುಸ್ಲಿಂ ಸಮುದಾಯವು ತಕ್ಕ ಬೆಲೆ ಕೊಡಲೇಬೇಕಾಗುತ್ತದೆ.

ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾಗಬೇಕು:
“ಮತದ ಸಮಯದಲ್ಲಿ ಜುಮಾ ಮಸೀದಿಗೆ ಬಂದು, ಅಧಿಕಾರದ ಸಮಯದಲ್ಲಿ ಹಿಂದಿರುಗಬೇಡಿ.”

ರಾಜೀನಾಮೆಗಳು ಪ್ರಾರಂಭವಾಗಿದೆಯೆಂದರೆ, ಇದು ತಾತ್ಕಾಲಿಕ ಅಸಮಾಧಾನವಲ್ಲ,
ಇದು ರಾಜಕೀಯ ಲೆಕ್ಕಾಚಾರದ ಆರಂಭ.

ರಾಜಕೀಯ ತಾಕತ್ತಿಗೆ ಸವಾಲು – ಪಕ್ಷಗಳು ಎಚ್ಚರಿಕೆಯಾಗಲಿ

ಈ ಬೆಳವಣಿಗೆಗಳು ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತವೆ.

ಮುಸ್ಲಿಂ ಸಮುದಾಯವನ್ನು ವೋಟು ಬ್ಯಾಂಕ್ ಅಷ್ಟೆಂದು ಕಾಣುವ ಕಾಲ ಪೂರ್ತಿಯಾಗಿದೆ.

ಇವರ ಅಸ್ತಿತ್ವ ಮತ್ತು ಭದ್ರತೆ ಮುಖ್ಯ ಎಂಡಾ ವಿಚಾರ – ಅದು ಚುನಾವಣಾ ಪ್ರಣಾಳಿಕೆಯಲ್ಲಿ ಮಾತ್ರ ಇರಬಾರದು, ಆಡಳಿತದ ನೆಲೆಯಲ್ಲೂ ಇರಬೇಕು. ಪ್ರತಿ ಹಲ್ಲೆಗಿಂತ ವೇಗವಾಗಿ ಪ್ರತಿಕ್ರಿಯೆ ನೀಡುವ ಶಾಸಕರು ಬೇಕು.

ಮೌನದಿಂದ ಮತ ಉಳಿಯುವುದಿಲ್ಲ. ಅದು ಕಳೆದು ಹೋಗುತ್ತದೆ.

ಈ ಕ್ಷಣ, ಕರ್ನಾಟಕದ ಮುಸ್ಲಿಂ ಸಮುದಾಯ, ರಾಜಕೀಯ ಪಕ್ಷಗಳ ಪ್ರಾಮಾಣಿಕತೆಗೆ ನೇರವಾಗಿ ಪ್ರಶ್ನೆ ಎತ್ತಿದೆ.
ಇದು ಕೇವಲ ಸ್ಥಳೀಯ ರಾಜಕೀಯ ಬಿಕ್ಕಟ್ಟಲ್ಲ, ಇದು ದೇಶದ ಜನಾಂಗೀಯ ರಾಜಕೀಯದಲ್ಲಿ ಹೊಸ ತಿರುವು

ಧ್ವನಿ ಇಲ್ಲದ ಶಾಸಕರು, ಭದ್ರತೆ ಒದಗಿಸದ ಸರ್ಕಾರಗಳು, ಮತ್ತು ಪ್ರಶ್ನಿಸುವ ಜನತೆ – ಈ ಮೂರರ ನಡುವೆ ನಡೆಯುತ್ತಿದೆ ಸಮಾಜದ ಮೌನವಿಲ್ಲದ ಹೋರಾಟ.

(✍️ ಅಫ್ಸರ್ ಕೋಡ್ಲಿಪೇಟೆ)

Leave a Reply

Your email address will not be published. Required fields are marked *