ತುಮಕೂರು-ಕೇಂದ್ರ-ಸರ್ಕಾರ-ಎಲ್.ಪಿ.ಜಿ.ಧರವನ್ನು-ತಕ್ಷಣವೇ- ಇಳಿಸಲಿ-ಎಸ್.ಟಿ.ಶ್ರೀನಿವಾಸ್-ಆಗ್ರಹ

ತುಮಕೂರು: ಕೇಂದ್ರ ಸರ್ಕಾರ ಎಲ್.ಪಿ.ಜಿ. ಅನಿಲ ದರವನ್ನು ಏಕಾಏಕಿ 50 ರೂ ಹೆಚ್ಚು ಮಾಡಿ ಸುಮಾರು 43೦೦೦ ಕೋಟಿ ಹಣವನ್ನು ವಸೂಲಿ ಮಾಡಲು ಮುಂದಾಗಿದೆ ಇದು ಜನಸಾಮಾನ್ಯರಿಗೆ ಮಾಡಿದ ದ್ರೋಹ.

ಪ್ರಧಾನ ಮಂತ್ರಿ ಉಜ್ವಲ ಯೋಜನಾ ಪಡೆದಿರುವ ಕಡು ಬಡವರನ್ನು ಬಿಡದೆ ಲೂಟಿ ಮಾಡುವುದು ಯಾವ ನ್ಯಾಯ?ನಮ್ಮ ತುಮಕೂರು ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮತ್ತೆ ಬೀದಿಗಿಳಿದು ಜನಸಾಮಾನ್ಯರ ಪರ ಹೋರಾಟ ಮಾಡುತ್ತಾರೋ? ಅಥವಾ ತಮ್ಮನು ಆಯ್ಕೆ ಮಾಡಿದ ಜನರಿಗೆ ವಿಶ್ವಾಸ ದ್ರೋಹ ಮಾಡುತಾರೋ? ಎಂದು ಪ್ರಶ್ನೆ ಮಾಡುವುದು ಸೂಕ್ತ.

ಅವರಿಗೆ ಪ್ರಾಮಾಣಿಕತೆ ಇದ್ದಲ್ಲಿ ಕನಿಷ್ಠ ಒಂದು ದಿನ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಿ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಟಿ. ಶ್ರೀನಿವಾಸ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

– ಕೆ.ಬಿ.ಚಂದ್ರಚೂಡ್

Leave a Reply

Your email address will not be published. Required fields are marked *

× How can I help you?