ತುಮಕೂರು- ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಕಾರ್ಯಕಾರಿ ಮಂಡಳಿಯ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ವಿ.ವಸಂತಕುಮಾರ್,ಜಿ.ನಾಗರಾಜು,ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭವ್ಯಶಾನುಭೋಗ್,ಶಿವಶಂಕರಯ್ಯ,ರವಿಗೌಡ,ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರೇಹಳ್ಳಿ ಮಹೇಶ್,ಬಿ.ಜಿ.ಸತೀಶ್,ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಧನಂಜಯ.ಟಿ.ಎಂ.ರವರುಗಳು ಮತದಾರಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಆರ್.ನಾಗೇಶ್ ರಾವ್ ಗಾಯಕ್ ವಾಡ್,ರಾಮಕೃಷ್ಣಯ್ಯ,ದೊಡ್ಡಶಾಣಯ್ಯ, ಹನುಮಂತಪುರ ಮಹದೇವಯ್ಯ,ಆರ್.ತಿಪ್ಪೇಸ್ವಾಮಿ,ಟಿ.ಹೆಚ್.ಕುಮಾರ್, ಮುಂತಾದವರು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ