ತುಮಕೂರು: ನಗರದ 31ನೇ ವಾರ್ಡಿನ ನೃಪತುಂಗ ಬಡಾವಣೆಯ 1ನೇ ಮುಖ್ಯರಸ್ತೆಯ ಇ ಕ್ರಾಸ್ ನಲ್ಲಿ ಕಳೆದ 5 ವರ್ಷಗಳಿಂದ ಯಾರೋ ಅಪರಿಚಿತರು ಬೀದಿ ಬದಿ ಬಿಟ್ಟು ಹೋಗಿದ್ದ ಕಾರನ್ನು ಇಂದು ಜಯನಗರ ಪೋಲೀಸರು ಬಂದು ತಮ್ಮ ವಶಕ್ಕೆ ಪಡೆದು ನಂತರ ಜಯನಗರ ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋದರು.

ಈ ಬಗ್ಗೆ 5 ವರ್ಷಗಳ ಹಿಂದೆ ಬಡಾವಣೆಯ ನಿವಾಸಿಗಳು ಠಾಣಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ಅವರು ಯಾವುದೇ ಕ್ರಮ ವಹಿಸಿರಲಿಲ್ಲ ಕಳೆದ 2 ದಿನಗಳ ಹಿಂದೆ ನಡೆದ ಜಯನಗರ ಪೋಲೀಸ್ ಜನಸಂಪರ್ಕ ಸಭೆಯಲ್ಲಿ ಈ ಬಗ್ಗೆ ಸಬ್ ಇನ್ಸ್ ಪೆಕ್ಟರ್ ಕೆ.ಪ್ರಸನ್ನಕುಮಾರ್, ಎ.ಎಸ್.ಐ.ದೇವರಾಜು ,ನೃಪತುಂಗ ಬಡಾವಣೆಯ ಬೀಟ್ ಪೋಲೀಸ್ ಹೇಮಲತಾರವರ ಗಮನಕ್ಕೆ ತಂದಾಗ ಅವರು ಕೊಟ್ಟ ವಾಗ್ದಾನದಂತೆ ಇಂದು ಬೀಟ್ ಪೋಲೀಸ್ ಆದ ಹೇಮಲತಾರವರು ಖುದ್ದು ಆಸಕ್ತಿ ವಹಿಸಿ ಇದನ್ನು ಕಾರನ್ನು ತೆರವುಗೊಳಿಸಿದ್ದಾರೆ ಇದರಿಂದ ನಾಗರೀಕರಿಗೆ ಸಂತೋಷವಾಗಿದ್ದು ನೃಪತುಂಗ ಬಡಾವಣೆಯ ನಾಗರೀಕ ಸಮಿತಿಯ ಪದಾಧಿಕಾರಿಗಳು,ನಾಗರೀಕರು ಜಯನಗರ ಪೋಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
– ಕೆ.ಬಿ.ಚಂದ್ರಚೂಡ