ತುಮಕೂರು: ನಾಗರೀಕ ನೈತಿಕತೆಗೂ ಪೋಷಕರಂತೆ ಪೋಲೀಸರು – ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಜಯನಗರ ಠಾಣೆ ಪಿ.ಎಸ್.ಐ.ಪ್ರಸನ್ನಕುಮಾರ್

ತುಮಕೂರು, ಜೂನ್ 12: “ನಿಮ್ಮ ರಕ್ಷಣೆಯೇ ನಮ್ಮ ಜವಾಬ್ದಾರಿ” ಎಂಬ ಘೋಷದೊಂದಿಗೆ, ನಾಗರೀಕರಲ್ಲಿ ಜಾಗೃತಿ ಮೂಡಿಸಲು ಜಯನಗರ ಪೊಲೀಸ್ ಠಾಣೆಯ ವತಿಯಿಂದ ಮಾರುಕಟ್ಟೆ ಅಶ್ವತ್ಥಕಟ್ಟೆ ಬಳಿಯಲ್ಲಿ ಜನಸಂಪರ್ಕ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿಎಸ್‌ಐ ಪ್ರಸನ್ನಕುಮಾರ್.ಕೆ ಮಾತನಾಡುತ್ತಾ, “ಸ್ವಂತ ಮನೆಗಳಿಗೆ ಕೋಟ್ಯಾಂತರ ಹಣ ಹಾಕಿದರೂ ಸಿಸಿ ಕ್ಯಾಮರಾ ಸ್ಥಾಪಿಸಲು ತಡ ಮಾಡುವುದು ವಿವೇಕವಲ್ಲ. ಬಡಾವಣೆಯಲ್ಲಿ ಹಲವು ದಿನಗಳ ಕಾಲ ಇರುವುದಿಲ್ಲ ಎಂದರೆ ಸ್ಥಳೀಯ ಬೀಟ್ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ, ಬೆಲೆಬಾಳುವ ವಸ್ತುಗಳನ್ನು ಠಾಣೆಗೆ ಒಪ್ಪಿಸಿ ಸುರಕ್ಷಿತವಾಗಿ ಹೋಗಿ ಬನ್ನಿ,” ಎಂದು ನಾಗರೀಕರನ್ನು ಮನವರಿಕೆ ಮಾಡಿದರು.

ಎಎಸ್‌ಐ ದೇವರಾಜು ಮಾತನಾಡಿ, ಸೈಬರ್ ಕ್ರೈಂ ಮಾದರಿಯಲ್ಲಿ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಜನರು ಯಾವುದೇ ಅನಾಮಧೇಯ ಕರೆ ಅಥವಾ ಆನ್‌ಲೈನ್ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ತಕ್ಷಣ ಸಹಾಯ ಬೇಕಾದರೆ 112 ಅನ್ನು ಕರೆ ಮಾಡಲು ಹೇಳಿದರು.

ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ವೀರಪ್ಪದೇವರು, ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಅಪಘಾತ ತಡೆಯಲು ಹಂಪ್ಸ್ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅನಿವಾರ್ಯ ಎಂದರು. ರಿಂಗ್‌ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿರುವ ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಯ ಸಹಕಾರವನ್ನು ಒತ್ತಾಯಿಸಿದರ

ಅಧ್ಯಕ್ಷತೆ ವಹಿಸಿದ ಎಸ್. ಪುಟ್ಟೀರಪ್ಪ ಮಾತನಾಡಿ, “ಪೋಲೀಸರು ತಮ್ಮ ಕುಟುಂಬದಿಂದ ದೂರ ಇರುತ್ತಾ ನಮ್ಮ ನಿರಂತರ ಸುರಕ್ಷತೆಗಾಗಿ ಶ್ರಮಿಸುತ್ತಿದ್ದಾರೆ. ನಮಗೂ ಅವರ ಪ್ರಯತ್ನಗಳಿಗೆ ಬೆಂಬಲ ನೀಡುವ ಹೊಣೆ ಇದೆ. ಮನೆಯ ಮುಂದೆ ಸಿಸಿ ಕ್ಯಾಮರಾ ಹಾಕುವುದು ಮಾತ್ರವಲ್ಲ, ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಪೊಲೀಸರಿಗೆ ತಿಳಿಸಬೇಕು,” ಎಂದು ಹೇಳಿದರು

ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್ ಸಿಬ್ಬಂದಿಗಳು, ಸ್ಥಳೀಯ ನಾಯಕರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *