ತುಮಕೂರು- ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳ್ಳಾವಿ ಹೋಬಳಿಯ ಬೆಳ್ಳಾವಿ ಗ್ರಾಮದ ಪಶು ಆಸ್ಪತ್ರೆಯ ಕಟ್ಟಡಕ್ಕೆ ಅಂದಾಜು 50 ಲಕ್ಷ ರೂ ಗಳಲ್ಲಿ, ಬೆಳ್ಳಾವಿ ಗ್ರಾಮದಿಂದ ಮಾವಿನಕುಂಟೆಯವರೆಗೆ ಅಂದಾಜು 2 ಕೋಟಿ ರೂ ಗಳಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗಳಿಗೆ ಭೂಮಿ ಪೂಜಾ ಹಾಗೂ ದೊಡ್ಡೇರಿ ಗ್ರಾಮದಲ್ಲಿ ಅಂದಾಜು 14 ಲಕ್ಷ ರೂ ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡರು ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಾಜಶೇಖರ್,ಮಾಜಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಡಿ ಶಂಕರಣ್ಣ,ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಲ್ಲಿಕಾರ್ಜುನ,ಉಪಾಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರಾದ ಪಾಲಕ್ಷಯ್ಯ,ಓಬಳಯ್ಯ, ಗಂಗಾಧರ್, ಗ್ರಾಮ ಪಂಚಾಯ್ತಿ ಸದಸ್ಯರಾದ ದೊಡ್ಡಯ್ಯ, ದೊಡ್ಡೇರಿ ದಿನೇಶ್, ಬಿ ಕೆ ಕುಮಾರಣ್ಣ,ನರಸಿಂಹಮೂರ್ತಿ ಮುಖಂಡರುಗಳಾದ ನರಸಿಂಹಮೂರ್ತಿ,ಸಿಂಗೀಪುರ ಕುಮಾರಣ್ಣ, ದೊಡ್ಡೇರಿ ಸ್ವಾಮಿ, ಕೆಂಪರಾಜು,ಸೋಮಣ್ಣ,ಚಿಕ್ಕಣ್ಣ ಮುಂತಾದವರು ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.
- ಸುರೇಶ್ ಎನ್.