ತುಮಕೂರು: ನ್ಯಾಯಧೀಶರಾಗಲು ಮತ್ತು ವಕೀಲರಾಗಲು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನಾರ್ಜನೆಗೆ ಮತ್ತು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣ ಮಾತ್ರ ದೊರೆಯುತ್ತಿದ್ದು ಆದರೆ ಮೌಲ್ಯಧಾರಿತ ಶಿಕ್ಷಣ ದೊರಕುವಂತೆ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ,ವಕೀಲರಾಗಬೇಕಾದವರು ಕಾಲಕಾಲಕ್ಕೆ ಅಪ್ ಗ್ರೇಡ್ ಆಗಬೇಕು,ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ಒಡ್ಡಿಕೊಂಡಿ ಕಕ್ಷಿದಾರರಿಗೆ ತ್ವರಿಗೆ ನ್ಯಾಯದಾನ ಒದಗಿಸಲು ಶ್ರಮ ಪಡಬೇಕು ಎಂದು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾರವರು ತಿಳಿಸಿದರು.
ಅವರು ಇಂದು ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ,ಎನ್,ಎಸ್,ಎಸ್, ಕಾನೂನು ಕೇಂದ್ರ, ಯೂತ್ ರೆಡ್ಕ್ರಾಸ್, ಸ್ಕೌಟ್ಸ್ & ಗೈಡ್ಸ್, ರೆಡ್ ರಿಬ್ಬನ್ ಕ್ಲಬ್, ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ 4ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ತುಮಕೂರು ಸುಭೇದಾರ್ ಯೋಗೀಶ್ ಕೆ.ಡಿ ರವರು ಸೈನಿಕರು ದೇಶ ಕಾಯುವ ನಿಟ್ಟಿನಲ್ಲಿ ಯಾವ ರೀತಿ ತಮ್ಮ ಕರ್ತವ್ಯವನ್ನು ಮತ್ತು ಯುದ್ದಗಳ ಸಮಯದಲ್ಲಿ ಸೈನಿಕರು ನಿರ್ವಹಿಸುವ ನೈಜ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಯುದ್ದಗಳ ಸಂಧರ್ಭದಲ್ಲಿ ಹಾಗೂ ಉಗ್ರಗಾಮಿಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಸಂಧರ್ಭದಲ್ಲಿ ಯಾವ ರೀತಿ ಸೈನಿಕರು ಯುದ್ದಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಹಾಗೂ ಆ ಸಂಧರ್ಭದಲ್ಲಿ ಅವರಿಗೆ ಉಂಟಾಗುವ ಅನಾನುಕೂಲಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾನೂನು ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳಾಗುವ ನೀ ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ದೇಶವನ್ನು ಪ್ರೀತಿಸುವುದು ಹೆತ್ತವರ ರಕ್ಷಣೆ ರೈತರು ಮತ್ತು ಸೈನಿಕರನ್ನು ಗೌರವಿಸುವುದು ಅದರ ಜೊತೆಗೆ ವಿದ್ಯಾರ್ಥಿಗಳು ಪೋಷಕರ ಕನಸನ್ನು ನನಸು ಮಾಡುವ ಜವಾಬ್ದಾರಿಯನ್ನು ಅರಿತಿರಬೇಕೆಂದು ತಿಳಿಸಿದರು.

ಎಂ.ಎನ್. ಮಧುಸೂಧನ್ ವಕೀಲರು ಮತ್ತು ಸದಸ್ಯರು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು ಹಾಗೂ ಕೆ.ಎಸ್.ಎಲ್.ಯು ಶೈಕ್ಷಣಿಕ ಮಂಡಳಿ ಸದಸ್ಯರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಲು ಅವಕಾಶ ನೀಡುತ್ತಿರುವುದರಿಂದ ಮುಂದೆ ಅವರು ವಕೀಲರ ವೃತ್ತಿಯಲ್ಲಿ ಮತ್ತು ಸಮಾಜದಲ್ಲಿ ಉತ್ತಮ ವಕೀಲರಾಗಲು ಕಾಲೇಜಿನ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀ ಹೆಚ್.ಎಸ್.ರಾಜುರವರು ಅಧ್ಯಕ್ಷತೆ ವಹಿಸಿದ್ದರು, ಪ್ರೊ.ಕೆ.ಚಂದ್ರಣ್ಣ ಉಪಸ್ಥಿತರಿದ್ದರು. ಕಾಲೇಜಿನ ವಾರ್ಷಿಕ ವರದಿಯನ್ನು ಶ್ರೀಮತಿ ಶಮಾ ಸೈಯದಿ ಪ್ರಭಾರ ಪ್ರಾಂಶುಪಾಲರುರವರು ನೀಡಿದರು.ಈ ಸಂದರ್ಭದಲ್ಲಿ ಪ್ರೊ.ಎ.ನಾರಾಯಣಸ್ವಾಮಿ,ಪ್ರೊ.ಪುಷ್ಪ,ಪ್ರೊ.ರಶ್ಮಿ,ಡಾ||ರವಿ,ಡಾ||ರಮೇಶ್,ಡಾ||ಕಿಶೋರ್ ಹಾಜರಿದ್ದರು.
– ಕೆ.ಬಿ.ಚಂದ್ರಚೂಡ