ತುಮಕೂರು: ಇಂದಿನ ಯುವಕ-ಯುವತಿಯರು ತಂಬಾಕು ಸೇವನೆಯಿಂದ ದೂರವಿರಬೇಕು,ದುಶ್ಚಟ ದುರಭ್ಯಾಸಗಳಿಂದ ದೂರವಿದ್ದು ದೇಶಕಟ್ಟಬೇಕು,ಹೊಗೆಸೊಪ್ಪು,ಹೊಗೆಪುಡಿ,ನಿಕೋಟಿನ್ ವಸ್ತುಗಳಿಂದ ದೂರವಿದ್ದು ತಮ್ಮ ಆರೋಗ್ಯದ ಕಡೆ ಸದಾ ನಿಗಾ ವಹಿಸಬೇಕು,ಮಧ್ಯಪಾನ,ಬೀಡಿ,ಸಿಗರೇಟು ಸೇವನೆಯಿಂದ ಹುಕ್ಕಾ ಬಾರ್ ಗಳಿಂದ ಇಂದು ದೇಶದ ಮಹಾನಗರ ಪಾಲಿಕೆಯ ವ್ಯಾಪ್ತಿಯ ದೊಡ್ಡ ದೊಡ್ಡ ನಗರಗಳಲ್ಲಿ ಯುವಕ-ಯುವತಿಯರು ಹಾಳಾಗುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದರಿಂದ ಯುವಕರು ಹೃದಯ ಸಂಬಂಧಿ ಖಾಯಿಲೆಗಳು,ಶ್ವಾಸಕೋಶ,ನರ ದೌರ್ಬಲ್ಯದಿಂದ,ಕ್ಯಾನ್ಸರ್,ಶಕ್ತಿ ಹೀನತೆಯಿಂದ,ಜ್ಞಾಪಕ ಶಕ್ತಿ ಕಡಿಮೆಯಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತರೂ,ವಕೀಲರೂ ಆದ ಕೆ.ಬಿ.ಚಂದ್ರಚೂಡರವರು ತಿಳಿಸಿದರು.
ಅವರು ಇಂದು ನಗರದ ಜಯಪುರದಲ್ಲಿರುವ ಸಮುದಾಯಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಸ್ವಾಸ್ಥ್ಯಸಂಕಲ್ಪ ಮತ್ತು ವಿಶ್ವ ತಂಬಾಕು ರಹಿತ ದಿನಾಚರಣೆ-2025ನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಣೇಶ್ ಪ್ರಸಾದ್ ರವರು ಮಾತನಾಡುತ್ತಾ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಯುವಕರು ಇಂದು ಮಾದಕ ವಸ್ತುಗಳಿಗೆ ವ್ಯಸನಿಗಳಾಗುತ್ತಿದ್ದು ಧೂಮಪಾನ,ಡ್ರಗ್ಸ್ ಗೆ ಬಲಿಯಾಗುತ್ತಿದ್ದಾರೆ,ಚಿಕ್ಕ ವಯಸ್ಸಿನಲ್ಲಿ ಮಾರಕ ರೋಗಗಳಿಗೆ ಬಲಿಯಾಗುತ್ತಿರುವುದು ದುರಂತ ಎಂದು ತಿಳಿಸಿದರು.
ತಾಲ್ಲೋಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ರವರು ಮಾತನಾಡುತ್ತಾ ವಿಶ್ವ ತಂಬಾಕು ರಹಿತ ದಿನ ಮಾಡುತ್ತಿರುವುದು ಎಲ್ಲ ತಾಯಂದಿರಿಗೆ ಅರಿವು ಮೂಡಿಸಲು ತಮ್ಮ ಮನೆಗಳಲ್ಲಿ ನಿಮ್ಮ ಗಂಡ,ಮಕ್ಕಳಿಗೆ ಈ ಎಲ್ಲಾ ವಿಚಾರಗಳನ್ನು ಮನದಟ್ಟು ಮಾಡಿ ಎಂದು ಕರೆ ನೀಡಿದರು.

ಯುವಕರು,ಯುವತಿಯರು ದುಶ್ಚಟ ದುರಭ್ಯಾಸಗಳಿಂದ ದೂರವಿದ್ದು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಧಿಸಬೇಕು,ಚಿಕ್ಕ ವಯಸ್ಸಿನಲ್ಲಿ ತಾವು ಅಂದುಕೊಂಡಿದ್ದನ್ನು ಗುರಿ ಮುಟ್ಟಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ವೈ.ಎಂ.ಸುದರ್ಶನ್,ಸೇವಾ ಪ್ರತಿನಿಧಿಗಳಾದ ಶಶಿಕಲಾ,ಅಸಿನಾ ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ